ಪರಿಷತ್`ನಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಕೆ: ಕುಮಾರಸ್ವಾಮಿ

ಗುರುವಾರ, 15 ಜೂನ್ 2017 (13:39 IST)
ವಿಧಾನ ಪರಿಷತ್`ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೈತ್ರಿ ವಿಧಾನಪರಿಷತ್`ಗೆ ಮಾತ್ರ ಸೀಮಿತ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅವಿಶ್ವಾಸ ನಿರ್ಣಯದಿಂದ ಸಭಾಪತಿ ಶಂಕರಮೂರ್ತಿ ಪದಚ್ಯುತಿ ಪ್ರಹಸನ ಒಂದು ಹಂತಕ್ಕೆ ಬಂದಂತಾಗಿದೆ.
 

ಪರಿಷತ್ ಸಭಾಪತಿ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ಮಂಡಿಸುವಾಗ ಕಾಂಗ್ರೆಸ್ ನಾಯಕರು ನಮ್ಮನ್ನ ಸಂಪರ್ಕಿಸಿಲ್ಲ. ಆ ಬಳಿಕವೂ ಕಾಂಗ್ರೆಸ್`ನ ನಿರ್ಣಯ ಕೈಗೊಳ್ಳುವ ನಾಯಕರು ನಮ್ಮನ್ನ ಸಂಪರ್ಕಿಸಿಲ್ಲ. ಬೆಳಗ್ಗೆ ಸಭಾಪತಿ ಸ್ಥಾನವನ್ನ ಜೆಡಿಎಸ್`ಗೆ ಬಿಟ್ಟುಕೊಡುವುದಾಗಿ ಹೇಳಿದ್ದು, ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂದು ಹೇಳಿದ್ದಾರೆ. ಆ ದೃಷ್ಟಿ ಅವರಿಗಿದ್ದಿದ್ದರೆ ನಮ್ಮ ಜೊತೆ ಪದಚ್ಯುತಿ ಬಗ್ಗೆ ಚರ್ಚೆ ನಡೆಸಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಕ್ಷವನ್ನ ಎರಡೂ ರಾಜಕೀಯ ಪಕ್ಷಗಳು ಆಟಿಕೆಯಾಗಿ ಬಳಸುತ್ತಿವೆ. ಕಾಂಗ್ರೆಸ್ ನಾಯಕರು ವಾರದ ಮುಂದೆಯೇ ನಮ್ಮನ್ನ ಸಂಪರ್ಕಿಸಿದ್ದರೆ ಮಾತುಕತೆ ನಡೆಸಬಹದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ