ಕುಮಾರ ಸ್ವಾಮಿ ಹಿಟ್ ಅಂಡ್ ರನ್ ಕೇಸ್ ವ್ಯಕ್ತಿ: ಸಿದ್ದರಾಮಯ್ಯ

ಮಂಗಳವಾರ, 16 ಫೆಬ್ರವರಿ 2016 (15:19 IST)
ದುಬಾರಿ ವಾಚ್ ಕುರಿತು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳುವ ಕುಮಾರಸ್ವಾಮಿ ಯಾವ ದಾಖಲೆಯನ್ನೂ ಬಿಡುಗಡೆ ಮಾಡುವುದಿಲ್ಲ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲವೆಂದು ಕಾಣುತ್ತದೆ ಎಂದು ಸಿದ್ದರಾಮಯ್ಯ  ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಹೇಳಿದ್ದಾರೆ.  ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ವ್ಯಕ್ತಿ.  ಆರೋಪ ಮಾಡಿ ಓಡಿಹೋಗುತ್ತಾರೆ. ದಾಖಲೆ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ. ಆದ್ರೆ ಯಾವುದೇ ದಾಖಲೆ ರಿಲೀಸ್ ಮಾಡಲ್ಲ ಎಂದು ಸಿಎಂ ವ್ಯಂಗ್ಯವಾಡಿದರು. 
 
ಹ್ಯೂಬ್ಲೋಟ್ ಕಂಪನಿಯ ಗಡಿಯಾರ  ದುಬಾರಿ ಕೈಗಡಿಯಾರಗಳಲ್ಲಿ ಒಂದಾಗಿದ್ದು, ಈ ಗಡಿಯಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಎಂದು ಹೇಳಲಾಗುತ್ತಿದ್ದು, ಗಡಿಯಾರದ ಬೆಲೆ 70 ಲಕ್ಷ ರೂ.ಗಳು ಎಂದು ಹೇಳಲಾಗುತ್ತಿದೆ.  ವಜ್ರದ ಹರಳುಗಳಿಂದ  ಈ ಗಡಿಯಾರವನ್ನು ವಿನ್ಯಾಸ ಮಾಡಲಾಗಿದೆ. ಈ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಇಂತಹ ದುಬಾರಿ ವಸ್ತುಗಳನ್ನು ಧರಿಸುವುದು ಏಕೆಂದು ಪ್ರಶ್ನಿಸಿದ್ದರು. 

ಆದರೆ ಈ ಗಡಿಯಾರವನ್ನು ಯಾರೋ ಗಿಫ್ಟ್ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದರೂ ಯಾರು ಕೊಟ್ಟರು, ಏಕೆ ಕೊಟ್ಟರು ಎನ್ನುವುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. 

ವೆಬ್ದುನಿಯಾವನ್ನು ಓದಿ