ಬಳಾರಿ ಜಿಲ್ಲೆಯ ಪರುಶುರಾಮ್ ಮತ್ತು ರೂಪಲೇಖಾ ದಂಪತಿಯ ಪುತ್ರ ಯಶವಂತ ಬೊನ್ ನ್ಯಾರೋ ಟ್ರಾನ್ಸಪ್ಲಾಂಟೇಶನ್ ಕಾಯಿಲೆಯಿಂದ ಬಳಲುತ್ತಿದ್ದ. ಬಡತನದಲ್ಲಿರುವ ದಂಪತಿ ಮಗನ ಚಿಕಿತ್ಸೆಗಾಗಿ ಪರದಾಡುತ್ತಿದ್ದು, ಈ ಕುರಿತು ಖಾಸಗಿ ಸುದ್ದಿ ವಾಹಿನಿ ಸಹಾಯ ಹಸ್ತ ಚಾಚುವಂತೆ ವರದಿಯನ್ನು ಪ್ರಸಾರ ಮಾಡಿತ್ತು. ಸುದ್ದಿ ವಾಹಿನಿಯ ವರದಿಗೆ ಎಚ್ಚತ್ತಿರುವ ಎಚ್.ಡಿ.ಕುಮಾರಸ್ವಾಮಿ ಬಾಲಕನ ಚಿಕಿತ್ಸೆಗಾಗಿ 26 ಲಕ್ಷ ರೂಪಾಯಿ ಸಹಾಯ ಧನ ನೀಡವುದಾಗಿ ಭರವಸೆ ನೀಡಿದ್ದಾರೆ.