ಬಿಜೆಪಿ ಭ್ರಷ್ಟಾಚಾರದ ಸಸಿನೆಟ್ಟಿದೆ, ಕಾಂಗ್ರೆಸ್ ನೀರೆರೆಯುತ್ತಿದೆ: ಕುಮಾರಸ್ವಾಮಿ

ಮಂಗಳವಾರ, 30 ಮೇ 2017 (13:00 IST)
ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದ ಸಸಿನೆಟ್ಟಿದ್ದರೆ, ಕಾಂಗ್ರೆಸ್ ನೀರು ಎರೆದು ಪೋಷಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
 
ಕುಮಾರಸ್ವಾಮಿ ಎಲ್ಲಾ ಕಡೆಗಳಲ್ಲಿ ಮನೆ ಮಾಡುತ್ತಿದ್ದಾರೆ ಎನ್ನುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳಿಯಲ್ಲಿ ಚುನಾವಣೆ ಗಿಮಿಕ್‌ಗಾಗಿ ಮನೆ ಮಾಡಿಲ್ಲ. ನಾನು ಮನೆ ಮಾಡಿರುವುದು ಶೆಟ್ಟರ್ ಆತಂಕಕ್ಕೆ ಕಾರಣವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದ ಹಿತಾಸಕ್ತಿಯನ್ನು ಗಮನಿಸಿದೆ ಆರೋಪ ಪ್ರತ್ಯಾರೋಪಗಳಲ್ಲಿ ನಿರತವಾಗಿವೆ.  ಬರಗಾಲ ನಿರ್ವಹಣೆ ಕುರಿತಂತೆ ಉಭಯ ಪಕ್ಷಗಳು ನಿರ್ಲಕ್ಷ ತೋರಿವೆ ಎಂದು ವಾಗ್ದಾಳಿ ನಡೆಸಿದರು.
 
ಉತ್ತರ ಕರ್ನಾಟಕ ಹಳೆ ಮೈಸೂರು, ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಲ್ಲಿ ಜೆಡಿಎಸ್‌ಗ ಹೆಚ್ಚುತ್ತಿರುವ ಬೆಂಬಲದಿಂದ ಎರಡೂ ಪಕ್ಷಗಳು ಕಂಗಾಲಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 
   
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ