ಪರಿಶಿಷ್ಟ ಜಾತಿಗೆ ಸೇರಿದ ವಿಕಲಚೇತನ ವಿದ್ಯಾರ್ಥಿ ಸಹಾಯ ಕೋರಿ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಬಳಿ ಮನವಿ ಮಾಡಿಕೊಂಡಿದ್ದ. ವಿದ್ಯಾರ್ಥಿ ಇಂಗ್ಲೀಷ್ನಲ್ಲಿ ಮನವಿ ಪತ್ರ ಬರೆದು ತಂದಿದ್ದ ಎಂಬ ಕಾರಣಕ್ಕಾಗಿ ಕನ್ನಡದಲ್ಲಿ ಪತ್ರ ಬರೆದುಕೊಂಡು ಬರುವಂತೆ ಹೇಳಿ ವಾಪಸ್ ಕಳುಹಿಸಿದ್ದಾರೆ. ಇವರು ಆಂಜನೇಯ, ಆಧುನಿಕ ಅಂಬೇಡ್ಕರ್ ಬೇರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.