ಏನಿದು ಪ್ರಕರಣ: ನಮ್ಮ ಜಮೀನು ಈ ಹಿಂದೆ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಆ ವಿವಾದವನ್ನು ಬಗೆಹರಿಸಿಕೊಡುವಂತೆ ಪ್ರದೀಪ್ ಶೆಟ್ಟರ್ ಅವರ ಮೊರೆ ಹೋಗಲಾಗಿತ್ತು. ಈ ವೇಳೆ ಶೆಚ್ಚರ್ 9 ಲಕ್ಷ ಙಣ ಕೇಳಿದ್ದರು. ಅದನ್ನು ಕೊಟ್ಟಿದ್ದೆವು. ಬಳಿಕ ಹಣವನ್ನೂ ವಾಪಾಸ್ ನೀಡಿದ್ದರು. ಆದರೆ ಹಣವನ್ನು ವಾಪಾಸ್ ಪಡೆದಿದ್ದೇವೆ ಎಂದು ದಾಖಲೆಗಾಗಿ ನೀವು ಸಹಿ ಹಾಕಿ ಎಂದು ನಮ್ಮ ಕುಟುಂಬದ ಎಲ್ಲಾ ಸದಸ್ಯರಿಂದ ಪ್ರದೀಪ್ ಶೆಟ್ಟರ್ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ಅದೇ ಹಾಲೆಯನ್ನು ಭೂ ಕಬಳಿಕೆಗೆ ಬಳಸಿಕೊಳ್ಲುವ ಮೂಲಕ ನಮಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸಯೀದಾ ಆರೋಪಿಸಿದ್ದಾರೆ.
ಈ ಸಂಬಂಧ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದ ಜಾಫರ್ ಶೇಖ್, ನಮ್ಮ ಜಮೀನು ತಾರಿಹಾಳ ಗ್ರಾಮಕ್ಕೆ ಸೇರಿದ್ದಾಗಿದ್ದು, ಸ.ನಂ. 106ರಲ್ಲಿ ಒಟ್ಟು 9.14ಗುಂಟೆ ಜಮೀನಿದೆ. ಇದು ಈ ಹಿಂದೆ ನಮ್ಮ ತಾತ ಬಕ್ಸಾರ್ ಸಾಬ್ ಹೆಸರಿನಲ್ಲಿತ್ತು. ಇದು ಪ್ರಸ್ತುತ ಅವರ 9 ಮಕ್ಕಳಿಗೆ ಹಂಚಿಕೆಯಾಗಬೇಕಿತ್ತು. ಆದರೆ ಮೋಸ ಮಾಡಿದ್ದಾರೆ. ಪ್ರಸ್ತುತ ಇದೇ ಜಮೀನು ಹರ್ಷಾ ಹಾಗೂ ಈರಣ್ಣ ಚೌಡಿ ಎಂಬ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿದ್ದು, ಜಂಟಿ ಮಾಲಿಕತ್ವದಲ್ಲಿದೆ.