ಆರ್ಟ್ ಆಫ್ ಲೀವಿಂಗ್ ವಿರುದ್ಧ 11 ಎಕರೆ ಭೂಒತ್ತುವರಿ ಆರೋಪ

ಮಂಗಳವಾರ, 28 ಅಕ್ಟೋಬರ್ 2014 (15:24 IST)
ರವಿಶಂಕರ್  ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್  ಭೂಒತ್ತುವರಿ ಆರೋಪದ ಸುಳಿಗೆ ಸಿಕ್ಕಿಬಿದ್ದಿದೆ. ತಮಗೆ ಸೇರಿದ  ಕೆಂಗೇರಿ ಬಳಿಯಿರುವ ಸರ್ವೆ ನಂ. 71/2ಬಿಯ  11 ಎಕರೆ ಭೂಮಿಯನ್ನು ಆರ್ಟ್ ಆಫ್ ಲೀವಿಂಗ್ ಒತ್ತುವರಿ ಮಾಡಿಕೊಂಡಿದೆ ಎಂದು ಆರತಿಕೃಷ್ಣ  ಎಂಬುವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್  ಸರ್ವೆ ಕೂಡ ಮಾಡಿದ್ದು, 11 ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವುದು ದೃಢಪಟ್ಟಿದೆ.  ಆರ್ಟ್ ಆಫ್ ಲೀವಿಂಗ್ ಖರೀದಿಸಿದ್ದು 5 ಎಕರೆಯಾದ್ರೂ 11 ಎಕರೆ ಒತ್ತುವರಿಯಾಗಿರುವುದು ಸಂಶಯಕ್ಕೆ ಆಸ್ಪದ ಕಲ್ಪಿಸಿದ್ದು, ಸರ್ವೇ ವರದಿಯಲ್ಲಿ ಮೇಲ್ನೋಟಕ್ಕೆ  ಒತ್ತುವರಿಯಾಗಿರುವುದು ಸಾಬೀತಾಗಿದೆ.

ಆರತಿ ಕೃಷ್ಣ ಅವರು ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿದ್ದು, 11 ಎಕರೆ ಜಮೀನನ್ನು ಆರತಿ ಕೃಷ್ಣ ಪತಿಯಿಂದ ದಾನ ಪಡೆದಿದ್ದರು. 

ವೆಬ್ದುನಿಯಾವನ್ನು ಓದಿ