ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮೋಟಮ್ಮ, 1981ರಲ್ಲಿ ಚಿಕ್ಕಮಗಳೂರು ಡಿಸಿಯಾಗಿದ್ದ ಮಹಿಷಿಯವರು ನನಗೆ ಮೂಡಿಗೆರೆ ಜಿಲ್ಲೆಯ ಕಂದೂರ್ನಲ್ಲಿರುವ ಸರ್ವೆ ನಂಬರ್ 156ರಲ್ಲಿ 20 ಎಕರೆ ಭೂಮಿಯನ್ನು ಮಂಜೂರು ನೀಡಿದ್ದರು. ಒತ್ತುವರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಆರ್.ಹಿರೇಮಠ್ ಅವರಿಗೆ ನಾನು ಯಾವುದೇ ದಾಖಲೆ ನೀಡಿಲ್ಲ. ನಡೆದ ಘಟನೆಯ ಬಗ್ಗೆ ಮಾಹಿತಿ ಕೂಡಾ ನೀಡಿಲ್ಲ. ಅಗತ್ಯವಾದಲ್ಲಿ ಧರ್ಮಸ್ಥಳದಲ್ಲಿ ಆಣೆಪ್ರಮಾಣಕ್ಕೂ ಸಿದ್ದ ಎಂದು ತಹಶೀಲ್ದಾರ್ ನಾಗೇಶ್, ಮೋಟಮ್ಮ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.