ಸೊರಬ: ಶಕುಂತಲಾ ಬಂಗಾರಪ್ಪ ಪಾರ್ಥಿವ ಶರೀರದ ದರ್ಶನಕ್ಕೆ ಕುಮಾರ್ ಬಂಗಾರಪ್ಪ ಇಂದು ಬೆಳಿಗ್ಗೆ ಬಂಗಾರಪ್ಪ ನಿವಾಸಕ್ಕೆ ಆಗಮಿಸಿದಾಗ ಮಧು ಬಂಗಾರಪ್ಪ ಬೆಂಬಲಿಗರು ತಡೆಯಲು ಮುಂದಾದಾಗ ಇಬ್ಬರು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನುಗ್ಗಾಟ ನಡೆಯಿತು. ಮಧುಬಂಗಾರಪ್ಪ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿ ಇಬ್ಬರು ಸೋದರರ ನಡುವೆ ತೀವ್ರ ವಾದ, ವಿವಾದ ನಡೆಯಿತು. ತಾಯಿಯ ಅಂತ್ಯಸಂಸ್ಕಾರದಲ್ಲಿ ಕೂಡ ರಾಜಕೀಯ ಇಣುಕಿ ಪರಿಸ್ಥಿತಿ ವಿಕೋಪಕ್ಕೆ ತಲುಪಿತು. ತಾಯಿ ಕಾಯಿಲೆ ಬಿದ್ದಾಗ ನೋಡಲು ಬರದವನು ಈಗ ಏಕೆ ಬರುತ್ತಿದ್ದಾನೆ ಎಂದು ಮಧು ಆಕ್ಷೇಪಿಸಿದಾಗ ಸಹೋದರರ ನಡುವೆ ಮಾತಿನ ಚಕಮಕಿ ನಡೆಯಿತು.