ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆ ನಡೆಯುತ್ತಿತ್ತು. ನಮ್ಮ ಬೆಂಬಲಿಗರು ನಮ್ಮ ಉಚ್ಛಾಟನೆ ಸಲ್ಲದು ಎಂದು ಸ್ವಲ್ಪ ಗದ್ದಲ ನಿರ್ಮಿಸಿದರು. ಈ ವೇಳೆ ಗದ್ದಲವೇ ಗಲಾಟೆಯಾಗಿ ಪರಿಣಮಿಸಿತು. ಬಳಿಕ ಆ ನಡುವೆಯೂ ನಮ್ಮ ಉಚ್ಛಾಟನಾ ನಿರ್ಣಯವನ್ನು ನಾಯಕರು ಮಂಡಿಸಿದರು. ಆದರೆ ಈ ವೇಳೆ ನಮ್ಮ ಹಾಗೂ ನಮ್ಮ ಬೆಂಬಲಿಗರ ಮೇಲೆ ಎಎಪಿ ನಾಯಕರು ಚಪ್ಪಲಿ ಎಸೆದು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಪಕ್ಷದ ಮತ್ತೋರ್ವ ನಾಯಕ ರಮ್ಜಾನ್ ಚೌದರಿ ಅವರ ಮೇಲೂ ಚಪ್ಪಲಿ ಎಸೆಯಲಾಗಿದೆ ಎಂದರು.
ಬಳಿಕ ಮಾತನಾಡಿದ ಅವರು, ಈ ಕೃತ್ಯವನ್ನು ವ್ಯವಸ್ಥಿತವಾಗಿ ಎಸಗಲು ಪಕ್ಷದ ನಾಯಕರು ಹೊರಗಿನಿಂದ ಕೆಲ ಗೂಂಡಾಗಳನ್ನು ಕರೆ ತಂದಿದ್ದರು. ಅಲ್ಲದೆ ಪಕ್ಷದಲ್ಲಿನ ಕೆಲ ಶಾಸಕರೇ ಗೂಂಡಾಗಳಂತೆ ವರ್ತಿಸಿದರು. ಇದೆಲ್ಲವೂ ಕೂಡ ರಾಜಕೀಯ ಪಿತೂರಿಯಾಗಿದ್ದು, ಸಭೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದರು.