ಕಾರ್ಯಕಾರಿಣಿಯಲ್ಲಿ ಭರ್ಜರಿ ನಿದ್ದೆಗೆ ಜಾರಿದ ನಾಯಕರು

ಶನಿವಾರ, 6 ಮೇ 2017 (13:24 IST)
ಕೇಂದ್ರ ಸಚಿವ ಅನಂತಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದರೆ, ಇತರ ಕೆಲ ನಾಯಕರು ಭರ್ಜರಿ ನಿದ್ರೆಗೆ ಜಾರಿರುವುದು ಕಂಡು ಬಂದಿತು.
 
ಅನಂತ್ ಕುಮಾರ್, ಯಡಿಯೂರಪ್ಪ, ಮುರಳಿಧರ್ ರಾವ್ ಭಾಷಣ ಮಾಡುತ್ತಿದ್ದರೆ, ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ನಾಯಕರು ನಿದ್ರೆಗೆ ಜಾರಿದ್ದರು.
 
ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವಾಗ ಕೂಡಾ ಕಾರ್ಯಕರ್ತರು ಮೌನವಾಗಿ ಕುಳಿತಿರುವುದು ಹುಮ್ಮಸ್ಸಿಲ್ಲದ ಕಾರ್ಯಕಾರಿಣಿ ಎನ್ನುವುದು ಸಾಬೀತಾಯಿತು.
 
ಕಾರ್ಯಕರ್ತರ ನೀರಸಮೌನದಿಂದ ಅಸಮಾಧಾನಗೊಂಡ ಯಡಿಯೂರಪ್ಪ ಇನ್ನಾದರೂ ಚಪ್ಪಾಳೆ ತಟ್ರಪ್ಪಾ ಎಂದು ಹೇಳುವಂತಹ ಅನಿವಾರ್ಯ ಸ್ಥಿತಿ ಎದುರಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ