ಶೃತಿಯ ಮದುವೆ ಮಾರ್ಚ್ 27 ರಂದು ನಿಶ್ಚಯವಾಗಿತ್ತು.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಿವಾಸಿ ಹುತ್ತೇಶ್ ಎಂಬ ಯುವಕನೊಂದಿಗೆ ಮದುವೆ ಶೃತಿ ಮದುವೆ ನಿಶ್ಚಯವಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುತ್ತೇಶ್ ಅವರ ಕುಟುಂಬದವರು ಹೆಚ್ಚಿನ ವರದಕ್ಷಿಣೆ ನೀಡುವಂತೆ ಶೃತಿ ಮನೆಯವರಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ.ಇದರಿಂದ ಶೃತಿ ತೀವ್ರ ನೊಂದಿದ್ದರು. ಜತೆಗೆ ಭಾವಿ ಪತ್ನಿ ಮಾಡರ್ನ್ ಆಗಿಲ್ಲವೆಂದು ಹುತ್ತೇಶ್ ಟೀಕಿಸುತ್ತಿದ್ದರಂತೆ. ಅದರಿಂದ ಮನನೊಂದಿದ್ದ ಶೃತಿ ಮಾರ್ಚ್ 17 ರಂದು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಳು. ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೃತಿ ಇಂದು ದುರ್ಮರಣವನ್ನಪ್ಪಿದ್ದಾರೆ.