ತನ್ನ ಉಪನ್ಯಾಸಕಿ ಫರಜಹಾನ್ನನ್ನು ಪ್ರೀತಿಸುತ್ತಿದ್ದ ಆರೋಪಿ ವಿರೇಶ್ ಶೆಟ್ಟಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಆ ಫರಜಹಾನ್ ಮದುವೆಗೆ ನಿರಾಕರಿಸಿದ್ದು ಇತ್ತೀಚಿಗೆ ಬೇರೊಬ್ಬರ ಜತೆಗೆ ಅವಳ ನಿಶ್ಚಿತಾರ್ಥವಾಗಿತ್ತು. ತನಗೆ ಸಿಗದವಳು ಯಾರಿಗೂ ಸಿಗಬಾರೆಂದು ನಿರ್ಧರಿಸಿದ ಆತ ಆಕೆಯನ್ನು ಅಪಹರಿಸಿ ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ.