ಅತೀವ ಸಾಲ ಮಾಡಿಕೊಂಡಿದ್ದ ರಾಘವೇಂದ್ರ ವಿವಾಹ ಕೂಡ ಸದ್ಯದಲ್ಲಿಯೇ ನೆರವೇರುವುದಿತ್ತು. ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿದ್ದ ರಾಘವೇಂದ್ರ ಮತ್ತೆ ಮದುವೆ ಖರ್ಚನ್ನು ಹೇಗೆ ತೂಗಿಸುವುದು ಎಂಬ ಚಿಂತೆಯಲ್ಲಿದ್ದ. ಆಗ ಆತನ ತಲೆಯಲ್ಲಿ ಒಂದು ಕ್ರಿಮಿನಲ್ ಯೋಚನೆ ಹೊಳೆದಿದೆ. ಅಂತೆಯೇ ತನ್ನ ಗೆಳೆಯ ವಿನೋದ್ ಬಳಸುತ್ತಿದ್ದ ದುಬಾರಿ ಬೆಲೆಯ ಬೈಕ್ ಕದ್ದು, ಮಾರಿ ಬಂದ ಹಣದಿಂದ ಸಾಲ ತೀರಿಸುವ ಯೋಜನೆಯನ್ನು ರೂಪಿಸಿದ್ದಾನಾತ. ಪೂರ್ವ ಯೋಜನೆಯಂತೆ ಬೈಕ್ನ ನಕಲಿ ಬೀಗದ ಕೈಯನ್ನು ಸಿದ್ಧಪಡಿಸಿಕೊಂಡು ಮತ್ತೊಬ್ಬ ಸ್ನೇಹಿತ ಗುರುಪ್ರಸಾದ್ ಬಳಿ ನೀಡಿದ್ದಾನೆ.