ಕರ್ನಾಟಕ-ತಮಿಳುನಾಡಿ ಗಡಿಯ ದಿಂಬಮ್ ಅರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ಈ ಘಟನೆ ನಡೆದಿದೆ. ಕೊಳ್ಳೆಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯ ನಿವಾಸಿ ಸೀನ (26) ತರಕಾರಿ ವ್ಯಾಪಾರಕ್ಕೆಂದು ತಮಿಳುನಾಡಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನದಿಂದ ಕೆಳಗಿಳಿದು ರಸ್ತೆ ಬದಿಗೆ ಹೋಗಿದ್ದರು. ಆ ಸಮಯದಲ್ಲಿ ದಾಳಿ ನಡೆಸಿದ ಚಿರತೆ, ಅವರನ್ನು ಎಳೆದುಕೊಂಡು ಕಾಡಿನೊಳಕ್ಕೆ ಕೊಂಡೊಯ್ದಿದೆ.