ಪ್ರಕರಣದ ಹಿನ್ನೆಲೆ: ಮೃತ ಜೈಶಂಕರ್ ಫೈನಾನ್ಸ್ ವ್ಯಹಾರಗಳನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದ್ದು, ಇತ್ತಿಚೆಗೆ ಸಾಕಷ್ಟು ನಷ್ಟ ಅನುಭವಿಸಿದ್ದರು. ನಷ್ಟದಿಂದ ಸಾಲವೂ ಕೂಡ ಮೀತಿ ಮೀರಿ ಬೆಳೆದಿತ್ತು ಎನ್ನಲಾಗಿದ್ದು, 14 ಲಕ್ಷಕ್ಕೂ ಅಧಿಕವಾಗಿತ್ತು. ಅಲ್ಲದೆ ಸಾಲಗಾರರು ಹಣ ವಾಪಾಸಾತಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಮನನೊಂದ ದಂಪತಿ ಇಂದು ಮೊದಲು ತಮ್ಮಗಳಿಗೆ ನೇಣು ಬಿಗಿದು ಹತ್ಯೆಗೈದು, ಬಳಿಕ ತಾವೂ ನೇಣಿಗೆ ಶರಣಾಗಿದ್ದಾರೆ.