ಮೂಲಗಳ ಪ್ರಕಾರ, ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ 16 ಎಕರೆ ಭೂಮಿಯನ್ನು ಅಶ್ವಿನ್ ರಾವ್ 2008 ಜೂನ್ 24 ಮತ್ತು 25ರಂದು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ವೇಳೆ ವಿಕಾರಾಬಾದ್ ಉಪನೋಂದಣಾಧಿಕಾರಿಯ ಸಹಿಯನ್ನು ನಕಲಿ ಮಾಡಿ ಪಹಣಿ ತಿದ್ದುವ ಮೂಲಕ ಅಕ್ರಮ ಎಸಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈ ಹಿಂದೆ ಅಂದರೆ 2011ರ ಆಗಸ್ಟ್ 9ರಂದು ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅಶ್ವಿನ್ ರಾವ್ ಸೇರಿ ಒಟ್ಟು 36 ಮಂದಿ ಆರೋಪಿಗಳಿದ್ದಾರೆ ಎಂದು ತಿಳಿದು ಬಂದಿದೆ.