ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ಇಬ್ಬರು ಬಲೆಗೆ

ಮಂಗಳವಾರ, 16 ಸೆಪ್ಟಂಬರ್ 2014 (19:37 IST)
ಪೊಲೀಸ್ ಕಮೀಷನರ್ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರನ್ನು ಬಲೆಗೆ ಸಿಕ್ಕಿಸಿದ್ದಾರೆ. ಹಿರಿಯ ಕಾನೂನು ಸಲಹೆಗಾರ್ತಿ ಶೈಲಜಾ ಮತ್ತು ಡಿ ದರ್ಜೆ ನೌಕರ ಭೈರಪ್ಪ ಇವರು ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದವರು.

ಮಹೇಶ್ ಎಂಬ ವ್ಯಕ್ತಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ಕೇಳಲು ಬಂದಿದ್ದಾಗ ಶೈಲಜಾ ಅವರಿಂದ 50,000 ಲಂಚವನ್ನು ಅಪೇಕ್ಷಿಸಿದ್ದರು.

ಈ ಕುರಿತು ಮಹೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಲೋಕಾಯುಕ್ತ ಪೊಲೀಸರು ಬಲೆಬೀಸಿ ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರನ್ನು  ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. 

ವೆಬ್ದುನಿಯಾವನ್ನು ಓದಿ