ನಗರದ ಸಿಬಿಐ ಕಚೇರಿಯ ಮುಖ್ಯಾಧಿಕಾರಿ ಸುಬ್ರಹ್ಮಣ್ಯೇಶ್ವರ ಅವರ ಮೂಲಕವಾಗಿ ನವದೆಹಲಿಯಲ್ಲಿನ ಕೇಂದ್ರ ಕಚೇರಿಗೆ ಈ ಅಧಿಸೂಚನೆಯನ್ನು ರವಾನಿಸಲಾಗಿದೆ. ಅಧಿಸೂಚನೆಯು ಬಳಿಕ ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ತಲುಪಲಿದ್ದು, ಇಲಾಖೆಯ ಕಾರ್ಯದರ್ಶಿಗಳು ಮತ್ತೆ ಅಧಿಸೂಚನೆ ಹೊರಡಿಸಿ ಸಿಬಿಐ ಕೇಂದ್ರ ಕಚೇರಿಯ ನಿರ್ದೇಶಕರಿಗೆ ಮತ್ತೊಂದು ಅಧಿಸೂಚನೆ ಹೊರಡಿಸುತ್ತಾರೆ. ಬಳಿಕ ಸಿಬಿಐ ನಿರ್ದೇಶಕರು ಈ ಬಗ್ಗೆ ಕ್ರಮ ಕೈಗೊಂಡು ಯಾವ ವಿಭಾಗಕ್ಕೆ ತನಿಖಾ ಜವಾಬ್ದಾರಿಯನ್ನು ನೀಡಬೇಕೆಂದು ನಿರ್ಧರಿಸಿ ತನಿಖಾಧಿಕಾರಿಗಳ ತಂಡವನ್ನು ಕಳುಹಿಸುತ್ತಾರೆ. ಆ ಬಳಿಕವಷ್ಟೇ ತನಿಖೆ ಆರಂಭವಾಗಲಿದೆ.
ಇನ್ನು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟಿಸಲು ಪ್ರತಿಪಕ್ಷಗಳು ತಯಾರಾಗುತ್ತಿದ್ದಂತೆ ಕಳೆದ ಎರಡು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಸಿಬಿಐಗೆ ವಹಿಸುತ್ತಿರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.