ಭಗ್ನಪ್ರೇಮದಿಂದ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ

ಸೋಮವಾರ, 21 ಏಪ್ರಿಲ್ 2014 (17:30 IST)
ಬೆಂಗಳೂರು: ಬೆಂಗಳೂರಿನ ಬನಶಂಕರಿಯ ಯಡಿಯೂರಿನಲ್ಲಿ ಸಿದ್ದರಾಮ ನಾಯಕ್ ಎಂಬ ಯುವಕ  ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯನ್ನು ಪ್ರೀತಿಸುತ್ತಿದ್ದ ಅವನು ಭಗ್ನಪ್ರೇಮದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಯುವಕ ಯುವತಿಯೊಬ್ಬಳನ್ನು ಗಾಢವಾಗಿ ಪ್ರೇಮಿಸಿದ್ದ. ಆದರೆ ಯುವತಿಯ ಮನೆಯವರು ಆ ಯುವಕನ ಜತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಯುವತಿ ಕೂಡ ಸಿದ್ದರಾಮನ ಜತೆ ಸಂಪರ್ಕವನ್ನು ನಿಲ್ಲಿಸಿದ್ದಳು.

 ಸಿದ್ದರಾಮ್ ತನ್ನ ತಂಗಿ ಮನೆಯಲ್ಲಿ ತಂಗಿದ್ದ. ಆದರೆ ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದರಿಂದ ತೀವ್ರವಾಗಿ ಮನನೊಂದಿದ್ದ ಅವನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿದ್ದರಾಮ್ ನಾಯಕ್ ಫೇಸ್‌ಬುಕ್ ಮೂಲಕ ಯುವತಿಯನ್ನು ಪ್ರೀತಿಸುತ್ತಿದ್ದ.

ಆದರೆ ಯುವತಿ ಕೈಕೊಟ್ಟಿದ್ದೆ ಅವನ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದ್ದರೂ, ಯುವಕನ ಮನೆಯವರು ಅವನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ