ಬೆಂಗಳೂರು: ಬೆಂಗಳೂರಿನ ಬನಶಂಕರಿಯ ಯಡಿಯೂರಿನಲ್ಲಿ ಸಿದ್ದರಾಮ ನಾಯಕ್ ಎಂಬ ಯುವಕ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯನ್ನು ಪ್ರೀತಿಸುತ್ತಿದ್ದ ಅವನು ಭಗ್ನಪ್ರೇಮದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಯುವಕ ಯುವತಿಯೊಬ್ಬಳನ್ನು ಗಾಢವಾಗಿ ಪ್ರೇಮಿಸಿದ್ದ. ಆದರೆ ಯುವತಿಯ ಮನೆಯವರು ಆ ಯುವಕನ ಜತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಯುವತಿ ಕೂಡ ಸಿದ್ದರಾಮನ ಜತೆ ಸಂಪರ್ಕವನ್ನು ನಿಲ್ಲಿಸಿದ್ದಳು.