ಪಂಚಭೂತಗಳಲ್ಲಿ ಲೀನವಾದ ಶಕುಂತಲಾ ಬಂಗಾರಪ್ಪ

ಬುಧವಾರ, 23 ಏಪ್ರಿಲ್ 2014 (17:33 IST)
ಶಿವಮೊಗ್ಗ: ಶಿವಮೊಗ್ಗದ ಸೊರಬದಲ್ಲಿರುವ ಬಂಗಾರಪ್ಪ ಸಮಾಧಿ ಪಕ್ಕದಲ್ಲೇ ಅವರ ಪತ್ನಿ ಶಶಿಕಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಮಧು ಮತ್ತು ಕುಮಾರ್ ಸಹೋದರರಿಬ್ಬರು ನಡೆಸಿದ ನಂತರ  ಚಿತೆಗೆ ಕಿರಿಯ ಪುತ್ರ ಮಧು ಬಂಗಾರಪ್ಪ  ಅಗ್ನಿಸ್ಪರ್ಶ ಮಾಡಿದರು. ಈ ವಿಧಿವಿಧಾನದಲ್ಲಿ ಕುಟುಂಬವರ್ಗದವರು ಭಾಗಿಯಾಗಿದ್ದು, ಪಂಚಭೂತಗಳಲ್ಲಿ ಶಕುಂತಲಾ ಬಂಗಾರಪ್ಪ ಲೀನವಾದರು.

ವಿದ್ವಾನ್ ನಾರಾಯಣ್ ಶಾಸ್ತ್ರಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಸಾವಿನಲ್ಲೂ ರಾಜಕೀಯ ಮಾಡಿ ಪೋಷಕರನ್ನು ಕಳೆದುಕೊಂಡಿದ್ದೇವೆ. ಕಳೆದ ಚುನಾವಣೆಯಲ್ಲಿ ತಂದೆಯನ್ನು ಕಳೆದುಕೊಂಡೆವು, ಈ ಬಾರಿ ತಾಯಿಯನ್ನು ಕಳೆದುಕೊಂಡೆವು.

ದೇವರು ಮಧುಗೆ ಒಳ್ಳೆಯ ಬುದ್ಧಿ ನೀಡಲಿ, ಇನ್ನು ಮುಂದಾದ್ರೂ ತಪ್ಪನ್ನು ತಿದ್ದಿಕೊಳ್ಳಬೇಕು. ಕುಟುಂಬದಲ್ಲಿ ಆದಷ್ಟು ಬೇಗ ಒಳ್ಳೆಯದಾಗಲಿ ಎಂದು ಕುಮಾರ್ ಬಂಗಾರಪ್ಪ ಕಣ್ಣೀರಿಡುತ್ತಾ ಪ್ರತಿಕ್ರಿಯೆ ನೀಡಿದರು. 

ವೆಬ್ದುನಿಯಾವನ್ನು ಓದಿ