ಕರ್ತವ್ಯಲೋಪ ಆರೋಪದಡಿ ಮಡಿವಾಳ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ಅವರನ್ನು ಅಮಾನತು ಮಾಡಲಾಗಿದ್ದು, ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಡಿವಾಳ ಠಾಣೆ ಪೇದೆಗಳಾದ ಶ್ರೀಧರ್ ಮತ್ತು ನರಸಿಂಹ ಎಂಬವರನ್ನು ಬಂಧಿಸಲಾಗಿದೆ. ಮಡಿವಾಳ ಕೆರೆ ಬಳಿ ಕುಳಿತಿದ್ದ ಟೆಕ್ಕಿ ದಂಪತಿಯನ್ನು ಪೊಲೀಸ್ ಠಾಣೆಗೆ ಬರುವಂತೆ ಇಬ್ಬರು ಪೇದೆಗಳು ಕರೆದಾಗ ಅವರು ನಿರಾಕರಿಸಿದರು. ನಂತರ ಅವರಿಂದ ಬಲವಂತವಾಗಿ 350 ರೂ. ವಸೂಲಿ ಮಾಡಿ ಬಿಟ್ಟಿದ್ದರು.