ಸಚಿವ ಡಿ. ವಿ. ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಜೊತೆ ತಮ್ಮ ಮದುವೆ ಘೋಷಣೆ ಕೋರಿದ್ದ ಮೈತ್ರಿಯಾ ಅರ್ಜಿ ವಜಾಗೊಂಡಿದೆ. ಅರ್ಜಿ ವಜಾ ಕೋರಿ ಕಾರ್ತಿಕ್ ಗೌಡ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಈ ಕುರಿತು ಅರ್ಜಿ ವಜಾ ಮಾಡಿದೆ. ಮದುವೆಗೆ ಸಂಬಂಧಿಸಿದ ಸೂಕ್ತ ಪುರಾವೆಗಳನ್ನು ಒದಗಿಸದೇ ಇರುವುದರಿಂದ ಅರ್ಜಿಯನ್ನು ವಜಾ ಮಾಡಿರುವುದಾಗಿ ಕೌಟುಂಬಿಕ ನ್ಯಾಯಾಲಯ ತಿಳಿಸಿದೆ.
ಡಿವಿಎಸ್ ಪುತ್ರ ಕಾರ್ತಿಕ್ ಗೌಡ ತಮ್ಮನ್ನು ಮದುವೆಯಾದ ಬಳಿಕ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚನೆ ಮಾಡಿದ್ದಾರೆಂದು ಮೈತ್ರಿಯಾ ದೂರು ನೀಡಿದ್ದು, ವಂಚನೆ, ಅತ್ಯಾಚಾರ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.