ಕೇಂದ್ರ ಸಚಿವ ಸದಾನಂದಗೌಡರ ಅಳಿಯ ಪ್ರದೀಪ್ ಗೌಡ ಬಂಧನ

ಭಾನುವಾರ, 4 ಅಕ್ಟೋಬರ್ 2015 (12:09 IST)
ಮಲೆಕುಡಿಯ ಬುಡಕಟ್ಟು ಸಮುದಾಯದ ಯುವಕನ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಖಾತೆ ಸಚಿವ ಸದಾನಂದಗೌಡ ಅವರ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.
 
ಕಳೆದ ಜುಲೈ 26 ರಂದು ಸದಾನಂದಗೌಡರ ಅಳಿಯ ಪ್ರದೀಪ್ ಗೌಡ, ಬುಡಕಟ್ಟು ಸಮುದಾಯದ ಸುಂದರ್ ಮಲೆಕುಡಿಯಾ ಎಂಬಾತನ ಮೇಲೆ ಕಟ್ಟಿಗೆ ಕತ್ತರಿಸುವ ಆಯುಧದಿಂದ ಹಲ್ಲೆ ಮಾಡಿದ್ದನು, ಹಲ್ಲೆಯಲ್ಲಿ ಮಲೆಕುಡಿಯಾನ ಬೆರಳು ಕತ್ತರಿಸಿ ಹೋಗಿದ್ದಲ್ಲದೇ ಕೈಗೆ ಗಂಭೀರವಾಗಿ ಗಾಯಗಳಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಘಟನೆಯ ನಂತರ ಆರೋಪಿ ಗೋಪಾಲಗೌಡ ಪರಾರಿಯಾಗಿದ್ದನು. ಆದರೆ, ಪೊಲೀಸರು ಆರೋಪಿ ಗೋಪಾಲಗೌಡ ಆಂಧ್ರಪ್ರದೇಶದಲ್ಲಿರುವ ಮಾಹಿತಿ ಪಡೆದು ವಿಶೇಷ ಪೊಲೀಸ್ ತಂಡದಿಂದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
 
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ