ಕೊಪ್ಪಳ ಜಿಲ್ಲೆಯವರಾದ ಕಸ್ತೂರಿ ಮತ್ತು ಬಸವರಾಜ್ ಶಾಲಾ ದಿನಗಳಿಂದಲೇ ಪರಸ್ಪರ ಆಕರ್ಷಿತರಾಗಿದ್ದರು. ಕಸ್ತೂರಿಯನ್ನು ಆಕೆಯ ಪೋಷಕರು ಬೇರೆಯೊಬ್ಬನಿಗೆ ಕೊಟ್ಟ ವಿವಾಹ ಮಾಡಿದ್ದರು. ಆದರೆ, ವಿವಾಹದ ನಂತರ ಓಡಿ ಹೋದ ಕಸ್ತೂರಿ, ಪ್ರಿಯತಮ ಬಸವರಾಜ್ನೊಂದಿಗೆ ವಿವಾಹವಾಗಿ ಹೆಸರಘಟ್ಟದಲ್ಲಿರುವ ವಿನಾಯಕನಗರದಲ್ಲಿ ವಾಸವಾಗಿದ್ದಳು
ಸಹೋದರಿ ಕಸ್ತೂರಿ ಬಸವರಾಜುನೊಂದಿಗೆ ಓಡಿಹೋಗಿದ್ದರಿಂದ ಸೇಡು ತೀರಿಸಿಕೊಳ್ಳಲು ಬಯಸಿದ್ದ. ವಿನಾಯಕ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಹನುಮಂತರಾಯಪ್ಪ, ಬಸವರಾಜುವಿಗೆ ಕಸ್ತೂರಿಯನ್ನು ಬಿಡುವಂತೆ ಮನವಿ ಮಾಡಿದ್ದ. ಆದರೆ, ದಂಪತಿಗಳು ಅದನ್ನು ನಿರಾಕರಿಸಿದ್ದಾರೆ. ರಾತ್ರಿ ಸಹೋದರಿ ಕಸ್ತೂರಿ ಮತ್ತು ಆಕೆಯ ಪತಿ ಬಸವರಾಜು ಮಲಗಿದ್ದಾಗ ಹನುಮಂತರಾಯಪ್ಪ ಭೀಕರವಾಗಿ ದಂಪತಿಗಳನ್ನು ಹತ್ಯೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.