10 ವರ್ಷಗಳ ಹಿಂದೆ ನಮ್ಮ ಮದುವೆಯಾಗಿತ್ತು. ಮಾಗಡಿ ತಾಲೂಕಿನ ಹುಣಸೇಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದೆವು. ಆರಂಭದಿಂದಲು ಪತ್ನಿ ಮಂಜುಳಾ ನಡತೆ ಸರಿಯಾಗಿರಲಿಲ್ಲ. ಪ್ರತಿದಿನ ಆಕೆ ಬೇರೆ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾಳೆ ಎನ್ನುವ ಸುದ್ದಿಗಳು ನನಗೆ ಕೇಳಿಬರುತ್ತಿದ್ದವು. ಆದ್ದರಿಂದ ಬೇಸತ್ತ ನಾನು ಕಳೆದ 2009ರಲ್ಲಿ ಬೆಂಗಳೂರಿಗೆ ವಾಸದ ಮನೆಯನ್ನು ಬದಲಾಯಿಸಿದೆ. ಬೆಂಗಳೂರಿಗೆ ಬಂದ ನಂತರವು ಆಕೆ ಇತರ ಪುರುಷರೊಂದಿಗೆ ಸಂಬಂಧ ಮುಂದುವರಿಸಿದ್ದಳು. ಆದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿ ಕುಮಾರ್ ನಾಯಕ್ ಪೊಲೀಸರಿಗೆ ತಿಳಿಸಿದ್ದಾನೆ.