ತನ್ನ ಕಬ್ಬಿನ ಬೆಳೆಯನ್ನು ನಾಶಗೊಳಿಸಿದ ರೈತನನ್ನು ಉಮೇಶ್(50) ಎಂದು ಹೇಳಲಾಗಿದ್ದು, ಕಳೆದ ವರ್ಷ ಸಕ್ಕರೆ ಕಾರ್ಖಾನೆಗೆ ಕಬ್ಬು ರವಾನೆ ಮಾಡಿದ್ದ. ಆದರೆ ಆ ಬಾಕಿ ಹಣ ಇನ್ನೂ ಹಿಂದಿರುಗಿರಲಿಲ್ಲ. ಅಲ್ಲದೆ ಈ ಬಾರಿಯೂ ಕೂಡ ನಾಲ್ಕು ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದ. ಆದರೆ ಸರ್ಕಾರದಿಂದ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೇಸರಗೊಂಡ ರೈತ, ಬೆಳೆದು ನಿಂತಿದ್ದ ಬೆಳೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್ ಹರಿಬಿಡುವ ಮೂಲಕ ನಾಶಗೊಳಿಸಿದ್ದಾನೆ.