ಪೋಷಕರಿಂದ ಮದುವೆ ಮುಂದೂಡಿಕೆ: ಬೇಸತ್ತ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣು

ಮಂಗಳವಾರ, 6 ಅಕ್ಟೋಬರ್ 2015 (12:59 IST)
ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣ ಕೆಲ ವರ್ಷಗಳ ಬಳಿಕ ಮದುವೆ ಮಾಡುವುದಾಗಿ ತಿಳಿಸಿದ ಪೋಷಕರ ಮಾತಿನಿಂದ ಬೇಸತ್ತ ಇಬ್ಬರು ಯುವ ಪ್ರೇಮಿಗಳು, ಮನನೊಂದು ಇಲ್ಲಿನ ಕಪಿಲಾ ನದಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಪುವ ಘಟನೆ ಇಂದು ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಬಳಿ ನಡೆದಿದೆ.
 
ಮತೃರನ್ನು ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ನಿವಾಸಿ ಕೃಷ್ಣನಾಯ್ಕ(19) ಮತ್ತು ಹಗಿನವಾಳು ಗ್ರಾಮದ ಪುಟ್ಟಮ್ಮ(16) ಎಂದು ಹೇಳಲಾಗಿದ್ದು, ಇವರಿಬ್ಬರೂ ಕೂಡ ಸಂಬಂಧಿಗರೇ ಆಗಿದ್ದರು ಎನ್ನಲಾಗಿದೆ. 
 
ಕೃಷ್ಣನಾಯ್ಕ ವೃತ್ತಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಮದುವೆ ಮಾಡಿಸುವಂತೆ ಬಾಲಕಿಯ ಪೋಷಕರಲ್ಲಿ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ನಿರಾಕರಿಸಿದ ಪೋಷಕರು, ನಿಮಗಿನ್ನೂ ವಯಸ್ಸಾಗಿಲ್ಲ. ಕಾರಣ ಎರಡು ಅಥವಾ ಮೂರು ವರ್ಷಗಳ ಬಳಿಕ ಮದುವೆ ಮಾಡುವುದಾಗಿ ಸಮಜಾಯಿಷಿ ನೀಡಿದ್ದಾರೆ. ಇದರಿಂದ ಬೇಸತ್ತ ಪ್ರಮೇಮಿಗಳಿಬ್ಬರೂ ಒಂದೇ ವೇಲ್‌ನಲ್ಲಿ ಕಟ್ಟಿಕೊಂಡು ಕಪಿಲಾ ನದಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧಿಕರಾಗಿದ್ದ ಈ ಜೋಡಿಯ ಎರಡು ಕುಟುಂಬಗಳು ಅನೋನ್ಯವಾಗಿದ್ದ ಒಂದು ವರ್ಷದ ಹಿಂದೆಯಷ್ಟೇ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. 
 
ದೇಬೂರು ಬಳಿ ಮೃತರ ಶವಗಳು ದೊರೆತಿದ್ದು, ಈ ಸಂಬಂಧ ಪ್ರಕರಣ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. 

ವೆಬ್ದುನಿಯಾವನ್ನು ಓದಿ