ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೋರ್ಟ್, ಚುನಾವಣೆ ನಡೆದು ಫಲಿತಾಂಶವೂ ಬಂದಾಯಿತು. ಆದರೆ ಇನ್ನೂ ಕೂಡ ಮೇಯರ್ ಆಯ್ಕೆಯಾಗಿಲ್ಲ. ಈ ಸಂಬಂಧ ಚುನಾವಣೆ ಯಾವಾಗ ಎಂದು ಸರ್ಕಾರದ ಅಡ್ವೋಕೇಟ್ ಜನರಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ ಪ್ರೊ.ರವಿ ವರ್ಮಕುಮಾರ್, ಸೆ. 11ಕ್ಕೆ ಚುನಾವಣೆ ನಡೆಯಲಿದ್ದು, ಸಂವಿಧಾನ ಬದ್ಧವಾಗಿಯೇ ಆರಿಸಲಾಗುತ್ತದೆ ಎಂದು ಉತ್ತರಿಸಿದರು.
ಇದೇ ವೇಳೆ, ಜಿಲ್ಲಾ ಪಂಚಾಯತ್ನಲ್ಲಿ ಮತ ಚಲಾಯಿಸುವ ಹಕ್ಕನ್ನು ಶಾಸಕರು ಹೊಂದಿಲ್ಲ. ಆದರೆ ಪಾಲಿಕೆ ಚುನಾವಣೆಯಲ್ಲಿ ಮಾತ್ರ ಈ ನಿಯಮವಿದೆ, ಏಕೆ ಎಂಬ ಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಯಮವು ಕಳೆದ 22 ವರ್ಷಗಳಿಂದಲೂ ಕೂಡ ಅಸ್ತಿತ್ವದಲ್ಲಿದ್ದು, ಸರ್ಕಾರಕ್ಕೆ ಕಾನೂನು ರಚಿಸುವ ಅಧಿಕಾರವಿದೆ. ಅಲ್ಲದೆ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಕೂಡ ಈ ಕಾಯಿದೆಯ ಲಾಭ ಪಡೆದಿದೆ ಎಂದರು. ಇದಕ್ಕೆ ಅರ್ಜಿದಾರರ ವಕೀಲರು ವಿರೋಧ ವ್ಯಕ್ತಪಡಿಸಿದ ಕಾರಣ ಕೋರ್ಟ್, ಸಂವಿಧಾನ ಬದ್ಧವಾಗಿ ವಾದ ಮಂಡಿಸಲು ಎಜಿ ಅವರಿಗೆ ಸೂಚಿಸಿತು.