ಪ್ರಕರಣದ ಹಿನ್ನೆಲೆ: ಈ ಹಿಂದೆ ಗಣೇಶನ ಹಬ್ಬ ಆಚರಿಸುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆ ಘರ್ಷಣೆ ವಿವಾದವನ್ನು ಬಗೆಹರಿಸಲೆಂದು ಇಂದು ಇಬ್ರಾಹಿಂ ನೇತೃತ್ವದಲ್ಲಿ ಸಭೆ ಸೇರಿದ್ದರು. ಈ ವೇಳೆ ಇಬ್ಬರೂ ಕಾರ್ಪೊರೇಟರ್ಗಳ ನಡುವೆ ವಾಗ್ವಾದ ಏರ್ಪಟ್ಟು ಕೈ ಕೈ ಮಿಲಾಯಿಸಿಕೊಂಡಿದ್ದರೆ. ಅಲ್ಲದೆ ಅವರವರ ಬೆಂಬಲಿಗರ ನಡುವೆಯೂ ಕೂಡ ಹೊಡೆದಾಟ ನಡೆದಿದೆ.