ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ನಡೆದ ಘಟನೆ ನಡೆದಿದ್ದು, ಮೇಘನಾ ಚಾಕುವಿನಿಂದ ತನ್ನ ಪ್ರಿಯಕರ ಸುಮಂತನ ಕತ್ತು ಕತ್ತರಿಸಲು ಯತ್ನಿಸಿದ್ದಾಳೆ. ಆದರೆ, ಅಕಸ್ಮಿಕ ದಾಳಿಯಿಂದ ತಬ್ಬಿಬ್ಬಾದ ಸುಮಂತ ತಲೆ ತಗ್ಗಿಸಿದ್ದರಿಂದ ಮುಖಕ್ಕೆ ಚಾಕು ಚುಚ್ಚಿ ರಕ್ತಸ್ರಾವವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ