ವೇಶ್ಯಾವಾಟಿಕೆ ಅಡ್ಡೆ ಹೇಳಿಕೆ: ಪರಮೇಶ್ವರ್ ಪತ್ರಕ್ಕೆ ಉತ್ತರ ಬರೆದ ಸಚಿವ ಅಂಜನೇಯ

ಶುಕ್ರವಾರ, 20 ಮೇ 2016 (18:07 IST)
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಈ ರೀತಿ ವರ್ತಿಸುತ್ತಿವೆ. ನೊಂದ ಜನರ ಗೋಳು ಕೇಳಿ ಆಕ್ರೋಶದಿಂದ ಹೀಗೆ ಹೇಳಿಕೆ ನೀಡಿರುವುದಾಗಿ ಸಚಿವ ಅಂಜನೇಯ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಪತ್ರಕ್ಕೆ ಉತ್ತರಿಸಿದ್ದಾರೆ. 
 
ನನ್ನ ಹೇಳಿಕೆಯಿಂದ ಸರಕಾರದ ವರ್ಚಸಿಗೆ ಧಕ್ಕೆ ಬರುವುದಿಲ್ಲ ಎಂದು ಭಾವಿಸುವುದಾಗಿ ಸಚಿವ ಅಂಜನೇಯ್ ಹೇಳಿದ್ದಾರೆ.
 
ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡಿಗಿಂತಲೂ ಕಡೆ ಎಂದು ನಾನು ಯಾವತ್ತೂ ಹೇಳಿಲ್ಲ. ವೇಶ್ಯಾವಾಟಿಕೆ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
 
ಕೆಲ ದಿನಗಳ ಹಿಂದೆ ಸರಕಾರ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಎಚ್‌. ಆಂಜನೇಯ, ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿವೆ ಎಂದು ಟೀಕಿಸಿದ್ದರು. ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಹಣಕ್ಕಾಗಿ ಶಿಕ್ಷಣವನ್ನು ಮಾರಾಟ ಮಾಡುತ್ತಿರುವ ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡಿಗಿಂತಲೂ ಕಡೆಯಾಗಿದೆ ಎಂದು ಹೇಳಿಕೆ ನೀಡಿದ್ದರು. 
 
ರಾಜ್ಯ ಸರಕಾರದ ಸಚಿವರು ಇಂತಹ ಕೀಳು ಮಟ್ಟದ ಹೇಳಿಕೆ ನೀಡುವುದು ಅಸಮಂಜಸ, ಎಚ್‌. ಆಂಜನೇಯ ಯಾವ ಉದ್ದೇಶದಿಂದ ಇಂತಹ ಹೇಳಿಕೆ ನೀಡಿದ್ದಾರೆ ತಿಳಿಯದು. ತಮ್ಮ ಹೇಳಿಕೆಯ ಕುರಿತು ಸ್ಪಷ್ಟಪಡಿಸುವಂತೆ ಗೃಹ ಸಚಿವ  ಜಿ.ಪರಮೇಶ್ವರ್ ನಿನ್ನೆಯಷ್ಟೇ ಆಂಜನೇಯ ಅವರಿಗೆ ಪತ್ರ ಬರೆದಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ