ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಹಿರಂಗವಾಗಿದ್ದರೂ ಮತ್ತೆ ಅವರನ್ನೇ ಸಮರ್ಥಿಸಿಕೊಂಡ ಸಚಿವ ಅಂಜನೇಯ, ಆಕೆ ಅಮಾಯಕಳು, ಭ್ರಷ್ಟಾಚಾರ ನಡೆಸಿಲ್ಲ. ವಿಚಾರಣೆ ನಡೆಸದೆಯೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಯ ವಿರುದ್ಧವೇ ಗುಡುಗಿದರು.
ಈ ಮೊದಲು ನಡೆದ ಸಭೆಯಲ್ಲಿ ಕೂಡಾ ಸಚಿವ ಅಂಜನೇಯ ವಿಜಯಲಕ್ಷ್ಮಿಯವರನ್ನು ಸಮರ್ಥಿಸಿಕೊಂಡಾಗ, ಸಿಎಂ ಸಿದ್ದರಾಮಯ್ಯ ಸಚಿವ ಅಂಜನೇಯಗೆ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಅವರನ್ನು ಸಮರ್ಥಿಸಿಕೊಂಡ ಸಚಿವ ಅಂಜನೇಯ ಸಿಎಂ ಸಿದ್ದರಾಮಯ್ಯ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.