ಪೊಲೀಸ್ ಮೂಲಗಳ ಪ್ರಕಾರ, ದಾವಣಗೆರೆ ನಿವಾಸಿಯಾದ ಶಂಕರಪ್ಪನಿಗೆ ಅನಾಮಧೇಯ ಹೆಸರಿನಲ್ಲಿ, ಬೇರೆಯವರ ವಿಳಾಸವನ್ನು ಸೃಷ್ಟಿಸಿಕೊಂಡು ರಾಜಕಾರಣಿಗಳಿಗೆ ಪತ್ರ ಬರೆಯುವ ಚಟವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಗೆ ಅನಾಮಧೇಯ ಪತ್ರ ಬಂದಿದ್ದು, ಸಿಎಂ ಕಚೇರಿಯ ಅಧಿಕಾರಿಗಳು ಪತ್ರವನ್ನು ಪೊಲೀಸ್ ಇಲಾಖೆಗೆ ರವಾನಿಸಿದ್ದರು. ಪೊಲೀಸರು ಪತ್ರದ ಬಗ್ಗೆ ತನಿಖೆ ನಡೆಸಿದಾಗ ಅದು ದಾವಣಗೆರೆಯಿಂದ ಪೋಸ್ಟ್ ಆಗಿರುವುದು ತಿಳಿದು ಬಂದಿತ್ತು.