6 ಲಕ್ಷ ನಗದು, 40 ಲಕ್ಷ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಶನಿವಾರ, 23 ಆಗಸ್ಟ್ 2014 (19:16 IST)
ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನಾಭರಣ ಉದ್ಯಮಿಯನ್ನು ದರೋಡೆ ಮಾಡಿದ ಪ್ರಕರಣ ವರದಿಯಾಗಿದೆ. ರಿವಾಲ್ವರ್ ತೋರಿಸಿ  ಬೆದರಿಸಿ ಮೂವರು 6 ಲಕ್ಷ ರೂ. ನಗದು ಸೇರಿದಂತೆ 40 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನಗರ್ತಪೇಟೆಯ ಚಿನ್ನಾಭರಣ ಉದ್ಯಮಿಯಿಂದ ಹಣ ಅಪಹರಿಸಲಾಗಿದ್ದು, ಹಲಸೂರು ಗೇಟ್ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.

ಪರಾರಿಯಾಗಿರುವ ಮೂವರಿಗೆ ಪೊಲೀಸರು ಶೋಧ ನಡೆಸಿದ್ದಾರೆ. ನಗರ್ತಪೇಟೆ ರೋಹಿಣಿ ಡೈಮಂಡ್ಸ್ ಮಾಲೀಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ