ಕಾಣೆಯಾಗಿದ್ದ ಬಾಲಕಿ ಗೋಣಿಚೀಲದಲ್ಲಿ ಶವವಾಗಿ ಪತ್ತೆ: ದೂರು ದಾಖಲು

ಶನಿವಾರ, 23 ಮೇ 2015 (12:47 IST)
ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಕೊಳೆತ ಸ್ಥಿತಿಯಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿರುವ ಮನಕಲಕುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದ ವಾಡೆಪಕ್ಕದ ಹಳ್ಳದಲ್ಲಿ ಕಂಡು ಬಂದಿದೆ.  
 
ಮೃತ ಬಾಲಕಿಯನ್ನು ಪೂಜಾ ಶರಣಪ್ಪ ಸುಲ್ತಾನಪುರ(9) ಎಂದು ಹೇಳಲಾಗಿದ್ದು, ಇದೇ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಈಕೆ ಕಳೆದ 5 ದಿನಗಳ ಹಿಂದೆ ಕಾಣೆಯಾಗಿದ್ದಳು ಎಂದು ತಿಳಿದು ಬಂದಿದೆ. 
 
ಘಟನಾ ಸ್ಥಳಕ್ಕೆ ಜಿಲ್ಲೆಯ ಸಿಪಿಐ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣವನ್ನು ಪರಿಶೀಲಿಸಿದ್ದಾರೆ. ಮುದ್ದೆ ಬಿಹಾಳ ಠಾಣೆಯಲ್ಲಿ ಪ್ರಕಱಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 
 
ಇನ್ನು ಈ ಬಗ್ಗೆ ಮೃತ ಬಾಲಕಿಯ ಪೋಷಕರು ಪ್ರತಿಕ್ರಿಯಿಸಿದ್ದು, ತಮ್ಮ ಪುತ್ರಿ ಕಾಣೆಯಾದ ಬಗ್ಗೆ ಇಲ್ಲಿನ ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕಾಣೆಯಾದ ದಿನದಂದೇ ಮುಂದಾಗಿದ್ದೆವು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಪೊಲೀಸರನ್ನು ದೂರಿದ್ದಾರೆ. ಅಲ್ಲದೆ ಪೊಲೀಸರ ವರ್ತನೆಗೆ ಗ್ರಾಮದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ