ಮಾಜಿ ಸಚಿವ, ಕೆಜೆಪಿ ಶಾಸಕ ಡಾ. ಗುರುಪಾದಪ್ಪ ನಾಗಮಾರಪಲ್ಲಿ(74) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನವೆಂಬರ್ 11 ರಂದು ಅವರು ತಮ್ಮ 74 ನೇ ಜನ್ಮದಿನವನ್ನಾಚರಿಸಿಕೊಂಡಿದ್ದರು. 7 ಸಲ ಶಾಸಕರಾಗಿದ್ದ ಅವರು 3 ಸಲ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಸಹಕಾರ ಸಂಘಗಳ ಧುರೀಣ, ರಾಜಕೀಯ ಮುತ್ಸದ್ಧಿ ಬೀದರ್ ಉತ್ತರ ಕ್ಷೇತ್ರದ ಶಾಸಕರಾಗಿದ್ದರು.ನಿನ್ನೆ ರಾತ್ರಿ ಹೃದಯಾಘಾತವಾಗಿದ್ದರಿಂದ ಅವರನ್ನು ಇಂದು ಬೆಳಿಗ್ಗೆ 3.30 ಕ್ಕೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 5 ಗಂಟೆ ಸುಮಾರಿಗೆ ಅವರು ಮರವನ್ನಪ್ಪಿದ್ದಾರೆ.
ಔರಾದ್ನ ನಾಗಮಾರಪಲ್ಲಿಯಲ್ಲಿ 1942, ನವೆಂಬರ್ 11ರಂದು ಸಂಗನಬಸಪ್ಪ ಅವರ ಪುತ್ರರಾಗಿ ಜನಿಸಿದ್ದ ಗುರುಪಾದಪ್ಪ ಅವರು ಕೃಷಿ ಕುಟುಂಬ. 1985ರಿಂದ 2007 ರವರೆಗೆ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕರಾಗಿ, 1989ರಲ್ಲಿ ಗೃಹ ರಾಜ್ಯ ಸಚಿವರಾಗಿ, 1996-1998ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ ಸಚಿವ, 2005-2006ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಹಕಾರ ಕ್ಷೇತ್ರದಲ್ಲಿ ಬೀದರ್ಗೆ ಇವರು ಅಪಾರ ಕೊಡುಗೆ ಸಲ್ಲಿಸಿದ್ದು 1987ರಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಿದ ಕೀರ್ತಿ ಇವರದು. ದೇಶದಲ್ಲಿಯೇ ಪ್ರಥಮವೆಂದೆನಿಸಿದ ಸುಸಜ್ಜಿತವಾದ ಮತ್ತು ಹೈಟೆಕ್ ತಂತ್ರಜ್ಞಾನವನ್ನು ಒಳಗೊಂಡ ಒಂದು ಸಹಕಾರ ತರಬೇತಿ ಕೇಂದ್ರವನ್ನು (ಸೌಹಾರ್ದ) ಬೀದರ್ನಲ್ಲಿ ಸ್ಥಾಪಿಸಿದ ಹೆಗ್ಗಳಿಕೆ ಅವರಾಗಿದೆ.