ಮೊಬೈಲ್ ಸ್ಫೋಟದಿಂದ ಎಡಗಣ್ಣು ಕಳೆದುಕೊಂಡ ಬಾಲಕ

ಮಂಗಳವಾರ, 24 ನವೆಂಬರ್ 2015 (12:37 IST)
ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡು ಬಾಲಕನೊಬ್ಬ ಎಡಗಣ್ಣು ಕಳೆದುಕೊಂಡ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.  ವಿಜಯಪುರ ಹೊರವಲಯದಲ್ಲಿರುವ ಮನೆಯೊಂದರಲ್ಲಿ 14 ವರ್ಷದ ಬಾಲಕ ಮಹಂತೇಷ ಧನಸಿಂಗ್ ರಾಠೋಡ ಕಣ್ಣು ಕಳೆದುಕೊಂಡವನು.  ಮೊಬೈಲ್ ಚಾರ್ಜಿಂಗ್ ಮಾಡಿ ಪಕ್ಕದಲ್ಲಿ ಕುಳಿತಿದ್ದಾಗ ಭಾರೀ ಸದ್ದು ಮನೆಯವರಿಗೆ ಕೇಳಿತು.

ಮೊಬೈಲ್ ಬಳಿ ತೆರಳಿ ನೋಡಿದಾಗ ಬಾಲಕನ ಕಣ್ಣಿಗೆ ಮೊಬೈಲ್ ಚೂರುಗಳು ಸಿಡಿದು ಎಡಗಣ್ಣಿನ ಗುಡ್ಡೆ ಎರಡು ಹೋಳಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕ ಎಡಗಣ್ಣನ್ನು ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

 ಮೊಬೈಲ್ ಸ್ಫೋಟಗೊಂಡಿದ್ದು ಹೇಗೆಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.  ಚಾರ್ಜಿಂಗ್ ಮಾಡುವಾಗ ಮಾತನಾಡುತ್ತಿದ್ದ ಯುವಕ ಮೊಬೈಲ್ ಸ್ಫೋಟಗೊಂಡು ಮುಖ ಸುಟ್ಟುಕೊಂಡ ಘಟನೆ ಈ ಮುಂಚೆ ಸಂಭವಿಸಿತ್ತು.

ವೆಬ್ದುನಿಯಾವನ್ನು ಓದಿ