ಹಣಕ್ಕಾಗಿ ಹೆಣದ ಮುಂದೆ ಜಗಳವಾಡಿದ ಅತ್ತೆ, ಸೊಸೆ

ಗುರುವಾರ, 23 ಜುಲೈ 2015 (12:05 IST)
'ಹಣ ಅಂದ್ರೆ ಹೆಣವೂ ಬಾಯಿ ಬಿಡುತ್ತೆ' ಎಂಬ ಹಿರಿಯರ ಮಾತು ಅತ್ತೆ ಹಾಗೂ ಸೊಸೆಯರ ಕಿತ್ತಾಟದಿಂದ ನಿನ್ನೆ ಹುಬ್ಬಳ್ಳಿಯಲ್ಲಿ ಸಾಬೀತಾಗಿದ್ದು, ಸೊಸೆಯೋರ್ವಳು ತನ್ನ ಮಾವನ ಹಣಕ್ಕಾಗಿ ಹೆಣ ಎತ್ತಲು ಬಿಟ್ಟಿಲ್ಲ. 
 
ಘಟನೆಯ ಹಿನ್ನೆಲೆ: ಈ ಘಟನೆಯು ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದ್ದು, ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದ ಫಕ್ಕೀರಪ್ಪ ಮಾಯಣ್ಣವರ ಎಂಬುವವರು ನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು. ಬಳಿಕ ಮೃತ ದೇಹವನ್ನು ಗ್ರಾಮದ ಸ್ಮಶಾನಕ್ಕೆ ತೆಗೆದುಕೊಂಡು ಬರಲಾಗಿತ್ತು. ವಿಷಯ ತಿಳಿದ ಸೊಸೆ ಸ್ಥಳಕ್ಕಾಗಮಿಸಿ ಅಂತ್ಯಸಂಸ್ಕಾರ ನಡೆಸಲು ಅಡ್ಡಿಪಡಿಸಿದ್ದಾಳೆ. ಫಕ್ಕೀರಪ್ಪ ಅನಾರೋಗ್ಯದಿಂದ ಮೃತಪಟ್ಟಿಲ್ಲ. ಆತನಿಗೆ ಅತ್ತೆಯೇ ವಿಷ ನೀಡಿ ಸಾಯಿಸಿದ್ದಾಳೆ ಎಂಬುದು ಸೊಸೆಯ ಆರೋಪವಾಗಿದ್ದು, ಅತ್ತೆಯೇ ಹತ್ಯೆಗೈದಿದ್ದಾರೆ ಎಂಬು ಆಕೆಯ ವಾದ. 
 
ಈ ರಂಪಾಟ ಹಿನ್ನೆಲೆಯಲ್ಲಿ ಪೊಲೀಸ,ರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದಾಗ ಹಣದ ಆಸೆ ರಂಪಾಟಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಫಕ್ಕೀರಪ್ಪ ರೈಲ್ವೆ ಉದ್ಯೋಗಿಯಾಗಿದ್ದರಿಂದ 15 ಲಕ್ಷ ರೂ ಹಣ ಬರುತ್ತದೆ. ಅದು ನನಗೆ ಸೇರಬೇಕೆಂಬ ಆಸೆಯಿಂದ ಈ ರಂಪಾಟ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಅಂತ್ಯ ಸಂಸ್ಕಾರ ನಡೆಯಿತು ಎನ್ನಲಾಗಿದೆ. 
 
ಇನ್ನು ಈ ಇಬ್ಬರೂ ಇದಕ್ಕೂ ಮುನ್ನವೇ ಆಗಾಗ ಪ್ರತಿನಿತ್ಯ ಜಗಳವಾಡುತ್ತಿದ್ದರು ಎಂದೂ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ