ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ರೆಡ್ಡಿ ವಿರುದ್ಧ ಆರೋಪ ಮಾಡಿದ್ದೀರಿ. ಈಗ ನೀವೇನು ಮಾಡುತ್ತಿದ್ದೀರಿ, ರಿಪಬ್ಲಿಕ್ ಆಫ್ ಬೆಂಗಳೂರು ಮಾಡುತ್ತಿದ್ದೀರಾ. ಹಣ ಹಂಚುತ್ತಿದ್ದರೂ ಪೊಲೀಸರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ ಎಂದು ನಾರಾಯಣ ಸ್ವಾಮಿ ಆರೋಪಿಸಿದರು. ಹೀಗೆ ಮುಂದುವರಿದರೆ ಮುಂದಿನ ಅನಾಹುತಗಳಿಗೆ ರಾಜ್ಯಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.