ಮಕ್ಕಳಿಬ್ಬರಿಗೆ ನೇಣು ಹಾಕಿ ಆತ್ಮಹತ್ಯೆ

ಗುರುವಾರ, 28 ಏಪ್ರಿಲ್ 2016 (08:45 IST)
ತಾಯಿಯೋರ್ವಳು ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಘಟನೆ ರಾಮನಗರದ ಮಂಜುನಾಥ ನಗರದಲ್ಲಿ ನಡೆದಿದೆ. 
 
ಮೃತರನ್ನು ರೇಖಾ (30) ಮತ್ತು ಮಕ್ಕಳಾದ ಸ್ಫೂರ್ತಿ (9) ಹಾಗೂ ಪ್ರೀತಂ (8) ಎಂದು ಗುರುತಿಸಲಾಗಿದೆ. ಶವಗಳ ಸಮೀಪ ಡೆತ್ ನೋಟ್ ಕೂಡ ಸಿಕ್ಕಿದ್ದು ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. 
 
ಕಳೆದ 10 ವರ್ಷಗಳ ಹಿಂದೆ ಲಕ್ಷ್ಮಣ್‌ ಎಂಬುವರರ ಜತೆ ಪ್ರೇಮ ವಿವಾಹವಾಗಿದ್ದ ರೇಖಾ ಪತಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಳೆದ ಎರಡು ತಿಂಗಳಿಂದ ರಾಮನಗರದ ಮಂಜುನಾಥ ನಗರದಲ್ಲಿ ವಾಸವಿದ್ದ ದಂಪತಿ ನಡುವೆ ಇತ್ತೀಚಿಗೆ ಮನಸ್ತಾಪ ಹೆಚ್ಚಾಗಿತ್ತು. ಇದರಿಂದ ನೊಂದಿದ್ದ ರೇಖಾ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 
 
ಪತಿ ಲಕ್ಷ್ಮಣ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ