ಕಳೆದ 10 ವರ್ಷಗಳ ಹಿಂದೆ ಲಕ್ಷ್ಮಣ್ ಎಂಬುವರರ ಜತೆ ಪ್ರೇಮ ವಿವಾಹವಾಗಿದ್ದ ರೇಖಾ ಪತಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಳೆದ ಎರಡು ತಿಂಗಳಿಂದ ರಾಮನಗರದ ಮಂಜುನಾಥ ನಗರದಲ್ಲಿ ವಾಸವಿದ್ದ ದಂಪತಿ ನಡುವೆ ಇತ್ತೀಚಿಗೆ ಮನಸ್ತಾಪ ಹೆಚ್ಚಾಗಿತ್ತು. ಇದರಿಂದ ನೊಂದಿದ್ದ ರೇಖಾ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.