ಡಾ.ಗಿರೀಶ್ ಚಂದ್ರ ವಾಚ್ ಗಿಫ್ಟ್ ನೀಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಆತ್ಮಿಯರು ನೀಡಿದ್ದ ಗಿಫ್ಟ್ ವಿಷಯವನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬಹುದಿತ್ತಲ್ಲವೇ. ಯಾಕೆ ಬಹಿರಂಗಪಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಕಟ್ಟಿಕೊಂಡ ವಾಚ್ ಕಳ್ಳತನದ್ದಾಗಿರಬಹುದು ಎಂದು ನನಗೆ ಸಂಶಯ ವ್ಯಕ್ತವಾಗುತ್ತದೆ. ಆದ್ದರಿಂದ, ವಾಚ್ ಬಗ್ಗೆ ಪಾರದರ್ಶಕ ತನಿಖೆಯಾಗುವುದು ಸೂಕ್ತ ಎಂದಿದ್ದಾರೆ.