ವೈದ್ಯರ ರಾಜೀನಾಮೆಗೆ ಹೊಸ ಟ್ವಿಸ್ಟ್: ಖಾದರ್‌ಗೆ ಕ್ಷಮಾಪಣಾ ಪತ್ರ

ಬುಧವಾರ, 29 ಅಕ್ಟೋಬರ್ 2014 (15:36 IST)
ವೈದ್ಯರ ಸಾಮೂಹಿಕ ರಾಜೀನಾಮೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ನಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಡಿ ಎಂದು ಕೆಲ ವೈದ್ಯರು ತಿಳಿಸಿದ್ದು, ಆರೋಗ್ಯ ಸಚಿವರಿಗೆ ಹಲವು ವೈದ್ಯರು ಕ್ಷಮಾಪಣಾ ಪತ್ರವನ್ನು ಸಲ್ಲಿಸಿದ್ದಾರೆ.

 ರಾಜೀನಾಮೆ ಪತ್ರಕ್ಕೆ ನಾವು ಖುದ್ದಾಗಿ ಸಹಿ ಮಾಡಿಲ್ಲ. ನಮ್ಮ ನಕಲಿ ಸಹಿಯನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಗೆ ಬರೆದ ಪತ್ರದಲ್ಲಿ  ಕೆಲವು ವೈದ್ಯರು ತಿಳಿಸಿದ್ದು, , 20ಕ್ಕೂ ಹೆಚ್ಚು ವೈದ್ಯರು ವಿವಿಧ ಕಾರಣಗಳನ್ನು ನೀಡಿ ರಾಜೀನಾಮೆಯನ್ನು ವಾಪಸ್ ಪಡೆಯಲಿದ್ದಾರೆ ಎಂದು ಬೆಂಗಳೂರಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದರು.

ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದರಿಂದ ನಿನ್ನೆ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಸಮಸ್ಯೆಗಳಾಗಿತ್ತು. ನವಜಾತ ಶಿಶುವೊಂದು ಚಿಕಿತ್ಸೆಯ ಕೊರತೆಯಿಂದ ಮೃತಪಟ್ಟಿತ್ತು. ಹದಯಾಘಾತಕ್ಕೆ ಒಳಪಟ್ಟ ವ್ಯಕ್ತಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದರು. 

ವೆಬ್ದುನಿಯಾವನ್ನು ಓದಿ