ಬಂಧನ ಭೀತಿಯಿಂದ ನಿತ್ಯಾನಂದ ಎಸ್ಕೇಪ್: ಬರಿಗೈಲಿ ವಾಪಸಾದ ಸಿಐಡಿ

ಬುಧವಾರ, 30 ಜುಲೈ 2014 (15:28 IST)
ಪುರುಷತ್ವ ಪರೀಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ನಿತ್ಯಾನಂದನನ್ನು ಬಂಧಿಸಲು ರಾಮನಗರದ ಬಿಡದಿ ಆಶ್ರಮಕ್ಕೆ ತೆರಳಿದ್ದ ಸಿಐಡಿ ಅಧಿಕಾರಿಗಳು ಬರಿಗೈಲಿ ವಾಪಸಾಗಿದ್ದಾರೆ.
 
ವಿಚಾರಣೆಗೆ ಹಾಜರಾಗದಿದ್ದರಿಂದ ರಾಮನಗರ ಕೋರ್ಟ್ ಆರೋಪಿ ನಿತ್ಯಾನಂದ ವಿರುದ್ಧ ಜಾಮೀನುರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು.
 
ಪುರುಷತ್ವ ಪರೀಕ್ಷೆಯಿಂದ ಪಾರಾಗಲು ನ್ಯಾಯಾಲಯಕ್ಕೆ ಮತ್ತು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಿತ್ಯಾನಂದ ಹರಿದ್ವಾರಕ್ಕೆ ಎಸ್ಕೇಪ್ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ನಿತ್ಯಾನಂದನನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಅನೇಕ ಸಂಘಟನೆಗಳು ಆಶ್ರಮದ ಮುಂದೆ ಭಾರಿ ಪ್ರತಿಭಟನೆ ನಡೆಸಿವೆ
 
 

ವೆಬ್ದುನಿಯಾವನ್ನು ಓದಿ