ನಿತ್ಯಾನಂದನ ಪುರುಷತ್ವ ಪರೀಕ್ಷೆ ದೃಢಪಟ್ಟಿರುವ ನಡುವೆ, ವಿದೇಶ ಪ್ರವಾಸಕ್ಕೆ ಹೊರಡಲು ನಿತ್ಯಾನಂದ ಸಿದ್ಧತೆ ನಡೆಸಿದ್ದು, ಡಿ. 11ರಂದು ಕಾಂಬೋಡಿಯಾಕ್ಕೆ ತೆರಳಲು ಅನುಮತಿ ನೀಡಬೇಕೆಂದು ರಾಮನಗರ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಇಂದು ಮಧ್ಯಾಹ್ನ 3 ಗಂಟೆಗೆ ನಿತ್ಯಾನಂದನ ಅರ್ಜಿ ವಿಚಾರಣೆಗೆ ಬರಲಿದೆ. ಆದರೆ ನಿತ್ಯಾನಂದ ವಿರುದ್ಧ ಅತ್ಯಾಚಾರ ಕೇಸ್ ವಿಚಾರಣೆಯಲ್ಲಿದ್ದು, ತಪ್ಪಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡದಂತೆ ದೂರುದಾರರು ಆಕ್ಷೇಪಣೆ ಸಲ್ಲಿಸುವ ಸಾದ್ಯತೆಯಿದೆ.