ಪುರುಷತ್ವ ಪರೀಕ್ಷೆ ದೃಢಪಟ್ಟ ಬಳಿಕ ವಿದೇಶಕ್ಕೆ ಹಾರಲು ನಿತ್ಯಾನಂದ ಯೋಜನೆ

ಬುಧವಾರ, 26 ನವೆಂಬರ್ 2014 (13:31 IST)
ನಿತ್ಯಾನಂದನ ಪುರುಷತ್ವ ಪರೀಕ್ಷೆ ದೃಢಪಟ್ಟಿರುವ ನಡುವೆ, ವಿದೇಶ ಪ್ರವಾಸಕ್ಕೆ ಹೊರಡಲು ನಿತ್ಯಾನಂದ ಸಿದ್ಧತೆ ನಡೆಸಿದ್ದು, ಡಿ. 11ರಂದು ಕಾಂಬೋಡಿಯಾಕ್ಕೆ ತೆರಳಲು ಅನುಮತಿ ನೀಡಬೇಕೆಂದು ರಾಮನಗರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ವಿದೇಶದಲ್ಲಿ ಇನ್ನರ್ ಅವೇಕನಿಂಗ್ ಕೋರ್ಸ್ ನಡೆಸಬೇಕಿದ್ದು, ಈ ಕಾರಣಕ್ಕಾಗಿ ವಿದೇಶಕ್ಕೆ ಹೋಗಲು ಅನುಮತಿ ನೀಡಬೇಕೆಂದು ಕೋರಿದ್ದಾನೆ. ಆದರೆ ನಿತ್ಯಾನಂದನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ದೂರುದಾರರಿಗೆ ಸೂಚನೆ ನೀಡಿದೆ.  

ಇಂದು ಮಧ್ಯಾಹ್ನ 3 ಗಂಟೆಗೆ ನಿತ್ಯಾನಂದನ ಅರ್ಜಿ ವಿಚಾರಣೆಗೆ ಬರಲಿದೆ. ಆದರೆ ನಿತ್ಯಾನಂದ ವಿರುದ್ಧ ಅತ್ಯಾಚಾರ ಕೇಸ್  ವಿಚಾರಣೆಯಲ್ಲಿದ್ದು, ತಪ್ಪಿಸಿಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡದಂತೆ ದೂರುದಾರರು ಆಕ್ಷೇಪಣೆ ಸಲ್ಲಿಸುವ ಸಾದ್ಯತೆಯಿದೆ. 

ವೆಬ್ದುನಿಯಾವನ್ನು ಓದಿ