ಆಸ್ತಿ ವಿವರ ಸಲ್ಲಿಸದ ಮುನಿರತ್ನ ರಕ್ಷಣೆಗೆ ಬಿಬಿಎಂಪಿ ಮೇಯರ್

ಶುಕ್ರವಾರ, 22 ಆಗಸ್ಟ್ 2014 (15:18 IST)
ಎರಡು ವರ್ಷದಿಂದ ಆಸ್ತಿ ವಿವರ ಸಲ್ಲಿಸದ ಪಾಲಿಕೆ ಸದಸ್ಯ ಹಾಗೂ ಶಾಸಕ ಮುನಿರತ್ನ ರಕ್ಷಣೆಗೆ ಬಿಬಿಎಂಪಿ ಮೇಯರ್ ಮುಂದಾದ ಘಟನೆ ನಡೆದಿದೆ. ಏಪ್ರಿಲ್ 22ರಂದು ಆಸ್ತಿ ವಿವರ ಸಲ್ಲಿಸಲು ಕೊನೆ ದಿನವಾಗಿತ್ತು.

ಕೆಎಂಸಿ ಕಾಯ್ದೆ ಪ್ರಕಾರ ಮುನಿರತ್ನ ಆಸ್ತಿ ವಿವರ ಸಲ್ಲಿಸಬೇಕಿತ್ತು. ಸದಸ್ಯತ್ವ ರದ್ದಿಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಿತ್ತು. ಆದರೆ ಬಿಬಿಎಂಪಿ ಮೇಯರ್ ಅವರ ಸದಸ್ಯತ್ವ ರದ್ದು ಮಾಡುವುದಕ್ಕೆ ಶಿಫಾರಸು ಮಾಡಲು ಹಿಂಜರಿದಿದ್ದಾರೆ. ಆದರೆ ಮುಂದಿನ ಸಭೆಯಲ್ಲಿ ಈ ವಿಚಾರವನ್ನು ಎತ್ತಿಕೊಳ್ಳಲು ನಿರ್ಧರಿಸಿದ್ದಾರೆ.

ಮುನಿರತ್ನ ಅವರ ಜೊತೆ ಮತ್ತಿಬ್ಬರು ಬಿಬಿಎಂಪಿ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಮುನಿರತ್ನ ನಿರಾಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ