ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ: ಮತ್ತೆ ಕತ್ತಿ ಬೀಸಿದ ಉಮೇಶ್ ಕತ್ತಿ

ಶನಿವಾರ, 13 ಸೆಪ್ಟಂಬರ್ 2014 (19:20 IST)
ಹುಕ್ಕೇರಿ ಶಾಸಕರಾದ ಉಮೇಶ್ ಕತ್ತಿಯವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಬೆಳಗಾವಿಯನ್ನು ರಾಜಧಾನಿಯಾಗಿ ಮಾಡಬೇಕು ಎಂದು ಪುನರುಚ್ಚರಿಸಿದ್ದಾರೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿಯಾಗಿಲ್ಲ. ಆಂಧ್ರಪ್ರದೇಶದಲ್ಲಿ ಎರಡು ರಾಜ್ಯಗಳ ವಿಭಜನೆ ಮಾಡಿದಂತೆ ಕರ್ನಾಟಕವನ್ನು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಎರಡು ರಾಜ್ಯಗಳಾಗಿ ವಿಭಜಿಸಬೇಕು.

ನನ್ನ ಹೇಳಿಕೆ ಎಂದಿಗೂ ಅಚಲ ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಬೆಳಗಾವಿಯನ್ನು ಎರಡನೇ ರಾಜ್ಯವನ್ನಾಗಿ ಮಾಡುವುದಿಲ್ಲ.

ಬೆಂಗಳೂರು ರಾಜಧಾನಿಯಾಗಿ ಇರುವಾಗ ಬೆಳಗಾವಿಯನ್ನು ಮತ್ತೊಂದು ರಾಜಧಾನಿ ಮಾಡುವುದಿಲ್ಲ ಎಂದು ಹೇಳಿದ ಬಳಿಕ ಉಲ್ಟಾ ಹೊಡೆದಿರುವ ಉಮೇಶ್ ಕತ್ತಿ, ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಬೆಳಗಾವಿಯನ್ನು ರಾಜಧಾನಿಯನ್ನಾಗಿ ಮಾಡಿ ಎಂದು ಹೇಳಿಕೆ ಕೊಟ್ಟರು. 

ವೆಬ್ದುನಿಯಾವನ್ನು ಓದಿ