ನರ್ಸ್ ನಿರ್ಲಕ್ಷ್ಯಕ್ಕೆ ಮಗುವಿನ ಬೆರಳು ಕಟ್ ಆಗಿರುವ ಪ್ರಸಂಗ ವರದಿಯಾಗಿದೆ. ಬ್ಯಾಂಡೇಜನ್ನು ಕತ್ತರಿಯಿಂದ ಕತ್ತರಿಸುವಾಗ ನರ್ಸ್ ಜ್ಯೋತಿ ಎಂಬವರು ಮಗುವಿನ ಬೆರಳನ್ನೇ ಕಟ್ ಮಾಡಿದ್ದಾರೆ. ಶಿವಮೊಗ್ಗದ ವಿಘ್ನೇಶ್ವರ ಆಸ್ಪತ್ರೆಯಲ್ಲಿ ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಮಗುವಿಗೆ ಡ್ರಿಪ್ಸ್ ಹಾಕುವುದಕ್ಕೆ ಸೂಜಿಯಿಂದ ಚುಚ್ಚಿ ಬ್ಯಾಂಡೇಜ್ ಹಾಕಲಾಗಿತ್ತು.