ಓಟು ಕೇಳಕ್ಕೆ ಬರ್ತೀರಿ, ಗೆದ್ದ ಮೇಲೆ ಅಡ್ರೆಸ್ ಇರಲ್ಲ : ವೃದ್ಧರ ಆವಾಜ್‌‍ಗೆ ಜೆಡಿಎಸ್ ಅಭ್ಯರ್ಥಿ ತಬ್ಬಿಬ್ಬು

ಬುಧವಾರ, 3 ಫೆಬ್ರವರಿ 2016 (19:30 IST)
ಸುಮ್ಮನೇ ಮಾತಾಡ್ಬೇಡಿ, ಮನೆ ಹಿಂದಿನ ಚರಂಡಿ ನೋಡಿ, ಓಟು ಕೇಳಕ್ಕೆ ಬರ್ತೀರಿ, ಗೆದ್ದ ಮೇಲೆ ಅಡ್ರೆಸ್ ಇರಲ್ಲ ಎಂದು ಓಟು ಕೇಳಲು ಬಂದ ಜೆಡಿಎಸ್ ಅಭ್ಯರ್ಥಿ ಇಸ್ಮಾಯಿಲ್ ಷರೀಫ್ ಅವರಿಗೆ ಮತದಾರ ವೃದ್ಧರೊಬ್ಬರು ತರಾಟೆಗೆ ತೆಗೆದುಕೊಂಡರು.  ನಿಮಗೆ ಯಾವ ಕಾರಣಕ್ಕೆ ಓಟು ಕೊಡಬೇಕು ಹೇಳಿ ಎಂದು ಕೇಳಿದಾಗ ಉತ್ತರ ನೀಡಲು ತಡವರಿಸಿದ ಜೆಡಿಎಸ್ ಅಭ್ಯರ್ಥಿ ಅಲ್ಲಿಂದ ಸೈಲೆಂಟಾಗಿ ಪಲಾಯನ ಮಾಡಿದ್ದರು.

 ಮತದಾರನ ಆಕ್ರೋಶಕ್ಕೆ ಜೆಡಿಎಸ್ ಅಭ್ಯರ್ಥಿ ತಬ್ಬಿಬ್ಬಾಗಿದ್ದರು. ಬೆಂಗಳೂರಿನ ಗಂಗಾನಗರದಲ್ಲಿ ಪ್ರಚಾರದ ವೇಳೆ ಈ ಘಟನೆ ನಡೆದಿದೆ.  ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿರುವ ರೆಹ್ಮಾನ್ ಷರೀಫ್ ಅವರಿಗೆ ಎದುರಾಗಿ ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್ ಅವರನ್ನು ಕಣಕ್ಕಿಳಿಸಿದ್ದರು.

ಇಸ್ಮಾಯಿಲ್ ಷರೀಫ್ ಪ್ರಚಾರಕ್ಕಾಗಿ ಮನೆ, ಮನೆಗೆ ಹೋದಾಗ ಈ ವೃದ್ದರು ಅವರಿಗೆ ತಗುಲಿಹಾಕಿಕೊಂಡು ಕೇಳಿದ ಪ್ರಶ್ನೆಗೆ ಇಸ್ಮಾಯಿಲ್ ತಬ್ಬಿಬ್ಬಾದರು. 

ವೆಬ್ದುನಿಯಾವನ್ನು ಓದಿ