ಈ ಹುದ್ದೆ ನೇಮಕಕ್ಕಾಗಿ ನಾಲ್ವರ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಕ್ಕೆ ರವಾನಿಸಿತ್ತು. ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಸುಶಾಂತ್ ಮಹಾಪಾತ್ರ, ಬಿಪಿನ್ ಗೋಪಾಲಕೃಷ್ಣ, ಆರ್.ಕೆ.ದತ್ತಾ ಹಾಗೂ ಓಂ ಪ್ರಕಾಶ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಈ ಬಗ್ಗೆ ಸಭೆಗಳನ್ನು ನಡೆಸಿದ್ದ ಸರ್ಕಾರ, ಅಂತಿಮವಾಗಿ ಓಂ ಪ್ರಕಾಶ್ ಅವರ ಹೆಸರನ್ನು ಪ್ರಕಟಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಓಂ ಪ್ರಕಾಶ್ ಅವರ ನೇಮಕವನ್ನು ಘೋಷಿಸಿ ನೇಮಕ ಪತ್ರವನ್ನೂ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಓಪ್ರಕಾಶ್ ಇಂದು ಅಧಿಕಾರ ವಹಿಸಿಕೊಂಡರು.